Tuesday, February 27, 2018

"ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು " 2ನೆೇ ಮುದ್ರಣ

ಕೃತಿ ಕುರಿತು ಅಭಿಪ್ರಾಯ
ಪ್ರತಿ ಅಧ್ಯಾಯವೂ ವಿಜ್ಞಾನದ ಇತಿಹಾಸದಲ್ಲಿನ ಸಿಹಿ-ಕಹಿ ಕಥೆಗಳನ್ನು ಹೇಳುತ್ತದೆ: ವಿಜ್ಞಾನಿಗಳಲ್ಲಿ ವಿಶ್ವ ವಿಖ್ಯಾತರಾದವರೂ ಇದ್ದಾರೆ, ಜೀವ ಕಳೆದುಕೊಂಡವರೂ ಇದ್ದಾರೆ. ಭೌತ ವಿಜ್ಞಾನದಿಂದ ಹಿಡಿದು ರಸಾಯನ, ಜೀವ, ಭೂ, ಗಣಿತ, ಅಂತರಜಾಲ - ವಿಧಿ ವಿಜ್ಞಾನ ಕೂಡ – ಇವನ್ನೆಲ್ಲಾ ಕೂಡಿಸಿ, ಆ ವಿಷಯಗಳ ಮೇಲೆ ಮಾನವನ ಸಾಹಸ, ಆ ಸಾಹಸಗಳು ಸಾಧಿಸಿದ ವಿಜಯಗಳು, ಆ ವಿಜಯಗಳು ಹುಟ್ಟಿಸಿರುವ ವಿಸ್ಮಯ ಹಾಗೂ ಬೆರಗುಗಳನ್ನು ತಿಳಿಗನ್ನಡದಲ್ಲಿ ಕನ್ನಡದ ಜನತೆಗೆ ಅರ್ಪಿಸಿದ್ದಾರೆ. ಪುಸ್ತಕದ ಮೊದಲನೆ ಪುಟದಲ್ಲಿಯೇ ಎಚ್. ಆರ್. ಕೃಷ್ಣಮೂರ್ತಿಗಳು ಹೇಳಿರುವಂತೆ ಅಮೆರಿಕ ವಿಜ್ಞಾನಿ ರಿಚರ್ಡ್ ಫೈನ್‍ಮನ್ ಪ್ರಕಾರ ವಿಜ್ಞಾನವು ವಿಶ್ವದಲ್ಲಿ ನಡೆಯುತ್ತಿರುವ ಮಹಾ ಚದುರಂಗದಾಟದ ಗೂಢ, ಗುಪ್ತ ನಿಯಮಗಳನ್ನು ಕಂಡು ಹಿಡಿಯುವ ಸಾಹಸ. ಈ ಸಾಹಸದ ಹತ್ತಾರು ಕಥೆಗಳೇ ಈ ಪುಸ್ತಕದ ರಮ್ಯವಾದ ವಸ್ತು.
                                                                            - ಪ್ರೊ|| ರೊದ್ದಂ ನರಸಿಂಹ, ಖ್ಯಾತ ವಿಜ್ಞಾನಿ.

http://www.navakarnatakaonline.com/vijnanada-heddariyalli-mahatiruvugalu

Monday, February 19, 2018

"ಪ್ರಾಣಾಯಾಮ ಪ್ರಕಾಶಿಕಾ" ಪುಸ್ತಕ ಲೋಕಾರ್ಪಣೆ

ಪ್ರಿಯರೇ,
2018 ಫೆಬ್ರವರಿ 24ರಂದು ಸಂಜೆ 6.00 ಗಂಟೆಗೆ ಬೆಂಗಳೂರಿನ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿ ಸಭಾಂಗಣದಲ್ಲಿ ನವಕರ್ನಾಟಕ ಪ್ರಕಟಿಸಿರುವ ಯೋಗರತ್ನ ಡಾ. ಎಸ್ ಎನ್ ಓಂಕಾರ್ ಅವರ "ಪ್ರಾಣಾಯಾಮ ಪ್ರಕಾಶಿಕಾ" ಪುಸ್ತಕ ಲೋಕಾರ್ಪಣೆ ಮಾಡಲಾಗುವುದು. ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ. ಇದನ್ನು ನಿಮ್ಮ ಗೆಳೆಯರಿಗೂ ತಿಳಿಸಿ ಅವರನ್ನೂ ಕರೆತನ್ನಿ.
http://www.navakarnatakaonline.com/praanaayaama-prakaashikaa

Tuesday, February 6, 2018

ಫೆಬ್ರವರಿ 2018 ರ 'ಟೀಚರ್' ಶೈಕ್ಷಣಿಕ ಮಾಸಪತ್ರಿಕೆಯಲ್ಲಿ ಬೇದ್ರೆ ಮಂಜುನಾಥ ನವರ ಲೇಖನ

ಫೆಬ್ರವರಿ 2018 ರ 'ಟೀಚರ್' ಶೈಕ್ಷಣಿಕ ಮಾಸಪತ್ರಿಕೆ.
ಬೇದ್ರೆ ಮಂಜುನಾಥ ನವರ ಲೇಖನ "ಖಗೋಳ ವಿಸ್ಮಯಗಳ ಅಧ್ಯಯನಕ್ಕೆ ಪೂರಕ ಆಕಾಶ ವೀಕ್ಷಣೆ - ಗ್ರಹ ತಾರೆಗಳ ಮಾಹಿತಿ"
ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಅತ್ಯುಪಯುಕ್ತ ನವಕರ್ನಾಟಕ ಪುಸ್ತಕಗಳು ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
http://wwwhttp://www.navakarnatakaonline.com/bookslist?scid=430&val=1.navakarnatakaonline.com/bookslist?scid=430&val=1

http://www.navakarnatakaonline.com/bookslist?scid=430&val=1 
http://www.navakarnatakaonline.com/bookslist?scid=430&val=1
http://www.navakarnatakaonline.com/bookslist?scid=430&val=1