Thursday, March 22, 2012

ಆತ್ಮೀಯರೆ,

     ಈಗಾಗಲೇ ಐದು ಸುಸಜ್ಜಿತ ಪುಸ್ತಕ ಮಳಿಗೆಗಳನ್ನು ಹೊಂದಿರುವ ನವಕರ್ನಾಟಕ ಪ್ರಕಾಶನ ಸಂಸ್ಥೆ ತನ್ನ ಆರನೇ ಪುಸ್ತಕ ಮಳಿಗೆಯನ್ನು ಮಂಗಳೂರಿನಲ್ಲಿ ತೆರೆಯಲಿದೆ. ಮಂಗಳೂರಿನಲ್ಲಿ ಇದು ನಮ್ಮ ಎರಡನೇ ಮಳಿಗೆ.

     ಶ್ರೀ ಜಿ. ಏನ್. ಆಶೋಕವರ್ಧನ ಅವರು ಕಳೆದ 36 ವರ್ಷಗಳಿಂದ ಮಂಗಳೂರಿನ ಬಲ್ಮಠದ ಶರಾವತಿ ಕಟ್ಟಡದಲ್ಲಿ 'ಅತ್ರಿ ಬುಕ್ ಸೆಂಟರ್ ' ಮಳಿಗೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಈಗ ವೃತ್ತಿ  ಜೀವನದಿಂದ ವಿಶ್ರಾಂತರಾಗಲು ಬಯಸಿದ್ದಾರೆ. ಅವರ 'ಅತ್ರಿ ಬುಕ್ ಸೆಂಟರ್' ಇದೇ ಏಪ್ರಿಲ್ 1 ರಿಂದ  ನಮ್ಮ 'ನವಕರ್ನಾಟಕ ಪುಸ್ತಕ ಮಳಿಗೆ' ಆಗಲಿದೆ. ಇದರ ಉದ್ಘಾಟನೆ ಹಾಗೂ ಅದೇ ಸಂದರ್ಭದಲ್ಲಿ ನಡೆಯಲಿರುವ 'ತುಳುವರ ಮೂಲತಾನ  ಆದಿ ಆಲಡೆ' ಕೃತಿಯ ಲೋಕಾರ್ಪಣೆ ಸಮಾರಂಭದ  ಆಮಂತ್ರಣ ಲಗತ್ತಿಸಿದ್ದೇವೆ. ದಯವಿಟ್ಟು ಭಾಗವಹಿಸಿ.

     ಇದನ್ನು ನಿಮ್ಮ ಗೆಳೆಯರಿಗೂ, ಆಸಕ್ತರಿಗೂ ಕಳಿಸಿ. ಅವರನ್ನೂ ಕರೆತನ್ನಿ.

ವಂದನೆಗಳು,
ನವಕರ್ನಾಟಕ ಪ್ರಕಾಶನ

No comments:

Post a Comment